Slide
Slide
Slide
previous arrow
next arrow

ಭಗವದ್ಗೀತಾ ಅಭಿಯಾನ:ನೂತನ ಸಮಿತಿಯ ಅಧ್ಯಕ್ಷರಾಗಿ ಜೆ.ಟಿ.ಪೈ

300x250 AD

ಹೊನ್ನಾವರ: ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿಯ ಪೂರ್ವಭಾವಿ ಸಭೆ ಪಟ್ಟಣದ ಶ್ರೀಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಜೆ.ಟಿ.ಪೈ ಅವರನ್ನು ಮುಂದಿನ ಅವಧಿಗೂ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಎಮ್.ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ಡಾ.ಜಿ.ಪಿ.ಪಾಠಣ್, ಸಹ ಕಾರ್ಯದರ್ಶಿ ರಾಜೇಶ ಸಾಲೇಹಿತ್ತಲ್, ಉಪಾಧ್ಯಕ್ಷರಾಗಿ ಎಮ್.ಡಿ.ನಾಯ್ಕ, ದಾಮೋದರ್ ನಾಯ್ಕ, ಹಳದಿಪರ ಜಿ.ಜಿ.ಶಂಕರ್, ಉಮೇಶ್ ಎನ್.ನಾಯ್ಕ, ಸಂಚಾಲಕರಾಗಿ ಲೋಕೇಶ್ ಮೇಸ್ತ, ಸಂಜಯ್ ಎಸ್.ಶೇಟ್, ಮಂಜುನಾಥ್ ಆರ್.ನಾಯ್ಕ, ಅಣ್ಣಪ್ಪ ನಾಯ್ಕ, ಸದಸ್ಯರಾಗಿ ಪ.ಪಂ. ಅಧ್ಯಕ್ಷ ಶಿವರಾಜ್ ಮೇಸ್ತ, ಪತಂಜಲಿ ವೀಣಾಕರ್, ಅರ್ಜುನ್ ರಾಯ್ಕರ್, ಮಂಜುನಾಥ್ ಪಿ.ಶೇಟ್, ವಿನಾಯಕ್ ನಾಯ್ಕ ಹಳದಿಪುರ, ಸತ್ಯನಾರಾಯಣ ಭಟ್, ನಾಗರಾಜ್ ಶಾಸ್ತ್ರೀ, ಸುಬ್ರಮಣ್ಯ ಭಟ್, ಪ್ರಸನ್ನ ಪಂಡಿತ್, ಮೇಘಾ ನಾಯ್ಕ, ಶಾರದ ನಾಯ್ಕ, ಚಂಪಾ, ಉಮಾ ಕಾಣಕೊಣಕ, ಕೆ.ಬಿ.ನಾಯ್ಕ, ಸೀತಾರಾಮ್ ನಾಯ್ಕ, ಗಣಪತಿ ನಾಯ್ಕ ಹೊಸಪಟ್ಟಣ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಳೆದ ಸಾಲಿನ ಖರ್ಚು ವೆಚ್ಚದ ಲೆಕ್ಕವನ್ನು ಜಿ.ಪಿ.ಪಾಠಣಕರ್ ಸಲ್ಲಿಸಿದರು. ಜೆ.ಟಿ.ಪೈ ಸ್ವಾಗತಿಸಿ, ರಾಜೇಶ ಸಾಲೇಹಿತ್ತಲ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top